ವಚನ ದಾಸೋಹ : ಮರ ಮರ ಮಥನಿಸಿ
ವಚನ ದಾಸೋಹ : ಮರ ಮರ ಮಥನಿಸಿ ವಚನ: #ಮರ ಮರ ಮಥನಿಸಿ ಕಿಚ್ಚು ಹುಟ್ಟಿ ಸುತ್ತಣ ತರುಮರಾದಿಗಳ ಸುಡಲಾಯಿತ್ತು ಆತ್ಮವಾತ್ಮ ಮಥನಿಸಿ ಅನುಭಾವ ಹುಟ್ಟಿ ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು ಇಂತಪ್ಪ ಮಹಾನುಭಾವರ ಅನುಭಾವವ ತೋರಿ ಎನ್ನನುಳುಹಿಕೊಳ್ಳಾ, ಚೆನ್ನಮಲ್ಲಿಕಾರ್ಜುನ - ವೀರ ವಿರಾಗಿಣಿ ಅಕ್ಕ ಮಹಾದೇವಿ #ಅರ್ಥ: ಕಾಡಿನಲ್ಲಿ ಮರಕ್ಕೆ ಮರ ಘರ್ಷಿಸಿ ಬೆಂಕಿ (ಕಾಡು ಕಿಚ್ಚು) ಹತ್ತಿದರೆ ಸುತ್ತಲಿನ ಗಿಡ ಮರ ತರುಗಳು ಸುಟ್ಟು ಬೂದಿಯಾಗುತ್ತವೆ. ಅದೇ ರೀತಿ ಶುದ್ಧ ಆತ್ಮ ಆತ್ಮಗಳು ಘರ್ಷಿಸಿದರೆ, ಅನುಭವ ತೋರಿ ಈ ಹೊದ್ದಿದ್ದ ದೇಹದ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಸುಟ್ಟು ಬೂದಿಯಾಗುತ್ತವೆ. ಅಂತಹ ಮಹನುಭಾವಿ ಶರಣರ ಅನುಭಾವದ ಮಾರ್ಗ ತನಗೆ ತೋರಿ ತನ್ನೊಳಗಿನ ಅಂತರಂಗವನ್ನು ಶುದ್ಧವಾಗಿಸಿ ತನ್ನನ್ನು ಕಾಪಾಡು ಎಂದು ಚೆನ್ನಮಲ್ಲಿಕಾರ್ಜುನನಲ್ಲಿ ನಿವೇದಿಸಿಕೊಳ್ಳುತ್ತಾಳೆ. ಗುರು ಬಸವಣ್ಣನವರು ಮತ್ತು ದೇಶದ ಮೂಲೆಯಿಂದ ಆಗಮಿಸಿದ ಶರಣರ ಬಗ್ಗೆ ಮತ್ತು ಅನುಭವ ಮಂಟಪದ ವಿಚಾರಕ್ರಾಂತಿಯ ಗೋಷ್ಠಿಗಳ ಬಗ್ಗೆ ಮತ್ತು ಅವರೆಲ್ಲ ಮಾಡುತ್ತಿದ್ದ ಧರ್ಮಕ್ರಾಂತಿಯ ವಿಚಾರ ಕೇಳಿ ಒಮ್ಮೆ ತಾನು ಸಹ ಆ ಅನುಭವ ಮಂಟಪದಲ್ಲಿ ಶರಣರ ಸತ್ಸಂಗದಲ್ಲಿ, ಅವರ ಹೊಸ ವಿಚಾರಗಳನ್ನು ಅರಿತು ಅವರ ಮಾರ್ಗದರ್ಶನವನ್ನು ಪಡೆದು ಮುಂದೆ ಸಾಗಬೇಕು ಎಂದು ಕಲ್ಯಾಣಕ್ಕೆ ಬಂದವಳು. ಅಕ್ಕನ ವೈರಾಗ್ಯದ ಪ್ರಭೆ ಅನುಭಾವಮ...