Posts

Kundalini Yoga 1

Image
*Kundalini yoga*1 Kundalini meaning is circular or  snake or coiled. Kundalini-Shakti means serpent-like coiled energy, that rests at the base of the spine. It is dormant in most humans, but everyone has the potential to arouse this to higher consciousness and further expand it to reach oneness with the cosmos. This spiritual energy is said to lie dormant in 3 ½ coils. Kundalini shakti is the Prana-Shakti (life-force energy) of subtle body and becomes the link between the physical body and the casual body. It is a major source of our internal power.   Yoga is a spiritual path. It never advocates any difference between differant nationalities, differant religions, differant castes, rich-poor classes and male-female sexes. Basic principle of yoga is "all living and nonliving things and infact the entire universe is created by one God or by one source". We bow before that divine source with humility, devotion and we surrounder our ego and everything else and ask to b

ವಚನ ದಾಸೋಹ: ರೂಪನೆ ಕಂಡರು, ನಿರೂಪ ಕಾಣರು.

Image
ವಚನ ದಾಸೋಹ: ರೂಪನೆ ಕಂಡರು, ನಿರೂಪ ಕಾಣರು. ವಚನ: #ರೂಪನೆ ಕಂಡರು, ನಿರೂಪ ಕಾಣರು. ಅನುವನೆ ಕಂಡರು, ತನುವನೆ ಕಾಣರು. ಆಚಾರವನೆ ಕಂಡರು, ವಿಚಾರವನೆ ಕಾಣರು. ಗುಹೇಶ್ವರಾ-ನಿಮ್ಮ ಕುರುಹನೆ ಕಂಡರು, ಕೂಡಲರಿಯದೆ ಕೆಟ್ಟರು ! / 1375 - ಅಲ್ಲಮ ಪ್ರಭುಗಳು  *ಅರ್ಥ*: ಅಲ್ಲಮಪ್ರಭುಗಳು 12 ನೇ ಶತಮಾನದ ಪರಮ ಜಂಗಮಮೂರ್ತಿಗಳು, ಅತೀಂದ್ರಿಯ ಸಂತಶರಣರು ಮತ್ತು ಕನ್ನಡ ಭಾಷೆಯ ವಚನಕಾರ ಕವಿಗಳು.  ಸ್ವಯಂ ಮತ್ತು ನಿರಾಕಾರ ಶಿವನ ಏಕೀಕೃತ ಪ್ರಜ್ಞೆಯನ್ನು ಪ್ರಚಾರ ಮಾಡಿದವರು.  ಅಲ್ಲಮಪ್ರಭುಗಳು ಪ್ರಸಿದ್ಧ ಆಧ್ಯಾತ್ಮಿಕ ಜಂಗಮರು ಮತ್ತು ಮಧ್ಯಕಾಲೀನ ಕರ್ನಾಟಕ ಸಮಾಜ ಮತ್ತು ಆಧ್ಯಾತ್ಮಿಕ ಲೋಕವನ್ನು ಮತ್ತು ಕನ್ನಡ ಸಾಹಿತ್ಯವನ್ನು ಮರುರೂಪಿಸಿದವರು. ಗುರು ಬಸವಣ್ಣನವರ ಲಿಂಗಾಯತ ಚಳುವಳಿಗೆ ಹೊಸ ತಿರುವು ಕೊಟ್ಟ ಅತಿ ಮಹತ್ವದ ಮಾರ್ಗದರ್ಶಕರು, ಶೂನ್ಯಸಿಂಹಾಸನದ ಪ್ರಥಮ ಅಧ್ಯಕ್ಷರು.  *#ರೂಪನೆ ಕಂಡರು, ನಿರೂಪ ಕಾಣರು* ಜನರು ದೇವರ ಸಾಕಾರ ಮಾನವ ರೂಪವನ್ನು ಕಲ್ಪಿಸಿಕೊಂಡು ಅದನ್ನೇ ಪೂಜಿಸಿ ಅದನ್ನೇ ಕಂಡರು ಅಂದರೆ ಅದು ಅವರ ಮನಸ್ಸಿನಲ್ಲಿ ಮೂಡಿದ ಕಲ್ಪನೆ ಅಷ್ಟೇ, ರೂಪವೇ ಇಲ್ಲದ ನಿರೂಪ, ನಿಜವಾದ ನಿರಾಕಾರ ಪರವಸ್ತುವನ್ನು ಕಾಣಲೇ ಇಲ್ಲ.   . *#ಅನುವನೆ ಕಂಡರು, ತನುವನೆ ಕಾಣರು*. ಅನು(ಸಕ್ರಿಯೆ) ಪೂಜೆಯನ್ನು ಕಂಡರೆ ವಿನಃ ತಮ್ಮದೇ ತನುವಿನಲ್ಲಿಯ ದೇವರನ್ನು ಕಾಣಲಿಲ್ಲ.  *#ಆಚಾರವನೆ ಕಂಡರು, ವಿಚಾರವನೆ ಕಾಣರು*.  ಎಲ್ಲರೂ ತಮ್ಮ ತಮ್ಮ ಧರ್ಮಗಳಲ್ಲ

ವಚನ ದಾಸೋಹ:ಬ್ರಹ್ಮಪದವಿಯನೊಲ್ಲೆ ವಿಷ್ಣುಪದವಿಯನೊಲ್ಲೆ

Image
ವಚನ ದಾಸೋಹ: ಬ್ರಹ್ಮಪದವಿಯನೊಲ್ಲೆ ವಿಷ್ಣುಪದವಿಯನೊಲ್ಲೆ ವಚನ: #ಬ್ರಹ್ಮಪದವಿಯನೊಲ್ಲೆ ವಿಷ್ಣುಪದವಿಯನೊಲ್ಲೆ ರುದ್ರಪದವಿಯನೊಲ್ಲೆ ನಾನು ಮತ್ತಾವ ಪದವಿಯನೊಲ್ಲೆನಯ್ಯಾ, ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ. - ಗುರು ಬಸವಣ್ಣನವರು *Translation*: I do not seek The Brahma rank; I do not seek The Viṣṇu rank; I do not seek The Rudra rank. I seek, O Lord, No other rank! Give me of Thy grace The privilege to know the feet Of Thy true devotees! *ಅರ್ಥ*:    ಬಸವಣ್ಣನವರಿಗೆ ಮುಖ್ಯವಾದದ್ದು ನಿರ್ಗುಣ ತತ್ತ್ವಾತೀತವಾದ ಪರಶಿವನ ಅಂಶವಾದ ಶಿವಶರಣರ ಭಕ್ತಿಯ ಸತ್ಸಂಗ. ಬ್ರಹ್ಮಪದವಿ ಅಲ್ಲ, ವಿಷ್ಣುಪದವಿ ಅಲ್ಲ, ರುದ್ರಪದವಿ ಅಲ್ಲ. ಯಾವುದೇ ಪದವಿಯ ಆಶೆ ಇಲ್ಲ. ನಿಮ್ಮ ಸದ್ಭಕ್ತರ ಭಕ್ತಿಯ ಪಾದವನ್ನು ಅರಿಯುವುದೇ ಮಹಾಪದವಿ; ಅದನ್ನು  ಕರುಣಿಸಯ್ಶಾ ಎಂದು ಕೂಡಲಸಂಗಮದೇವನಲ್ಲಿ ಬೇಡಿಕೊಳ್ಳುತ್ತಾರೆ. ಸದ್ಭಕ್ತ ಎಂದರೆ ಯಾರು? #ಭೂತಿರುದ್ರಾಕ್ಷಸಂಯುಕ್ತೋ ಲಿಂಗಧಾರೀ ಸದಾಶಿವಃ | ಪಂಚಾಕ್ಷರಜಪೋದ್ಯೋಗೀ ಶಿವಭಕ್ತ ಇತಿ ಸ್ಮೃತಃ || 9-1 ವಿಭೂತಿ ರುದ್ರಾಕ್ಷಿಗಳನ್ನು ಧರಿಸಿದ, ಇಷ್ಟಲಿಂಗಧಾರಿಯಾದ, ಅಂತೆಯೇ ಸದಾ ಮಂಗಳಸ್ವರೂಪನಾದ ಮತ್ತು ಪಂಚಾಕ್ಷರ ಜಪದಲ್ಲಿ ನಿರತನಾದವನು ಶಿವಭಕ್ತ ಎಂದು ಕರೆಯಲ್ಪಡುತ್ತಾರೆ. ಇದು ಬಾಹ್ಯ ಸ್ವರೂಪವಾದರೆ, ಅಂತರಂಗದಲ್ಲಿ  ಸೃ

ವಚನ ದಾಸೋಹ : ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ

Image
ವಚನ ದಾಸೋಹ : ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ ವಚನ: #ಅಗ್ನಿಮುಟ್ಟಲು ತೃಣವಗ್ನಿಯಪ್ಪುದು ತಪ್ಪದಯ್ಯ. ಗುರುಪ್ರಸಾದವಂಗವ ಸೋಂಕಿದಲ್ಲಿ ಸರ್ವಾಂಗ ಗುರುವಪ್ಪುದು ತಪ್ಪದಯ್ಯ. ಲಿಂಗಪ್ರಸಾದ ಮನವ ಸೋಂಕಿದಲ್ಲಿ ಮನ ಲಿಂಗವಪ್ಪುದು ತಪ್ಪದಯ್ಯ. ಜಂಗಮಪ್ರಸಾದ ಅರಿವ ಸೋಂಕಿದಲ್ಲಿ ಅಖಂಡಿತ ಪ್ರಸನ್ನಪ್ರಸಾದವಪ್ಪುದು ತಪ್ಪದಯ್ಯ. ಶಿವಶಿವಾ, ಪ್ರಸಾದದ ಮಹಿಮೆಯನೇನೆಂದುಪಮಿಸುವೆ ? ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಪ್ರಸಾದವೇ ಜಂಗಮ, ಪ್ರಸಾದವೇ ಪರಾತ್ಪರ, ಪ್ರಸಾದವೇ ಪರಮಾನಂದ, ಪ್ರಸಾದವೇ ಪರಮಾಮೃತ, ಪ್ರಸಾದವೇ ಪರಮಜ್ಞಾನ, ಪ್ರಸಾದವೇ ವಾಙ್ಮನೋತೀತ, ಪ್ರಸಾದವೇ ನಿತ್ಯಪರಿಪೂರ್ಣ. ಇಂತಪ್ಪ ಪ್ರಸಾದವ ಕೊಂಡು ಬದುಕಿದೆನಯ್ಯ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. / 11 ಎನ್ನುತ್ತಾರೆ ಉರಿಲಿಂಗ ಪೆದ್ದಿ ಶರಣ ಗುರುಗಳು. *ಅರ್ಥ*:  ಗುರುಪ್ರಸಾದದಿಂದ ಸರ್ವಾಂಗವೂ ಗುರುವಾಗುವುದು. ಲಿಂಗಪ್ರಸಾದದಿಂದ ಸರ್ವಮನವೂ ಲಿಂಗವಾಗುವುದು. ಜಂಗಮಪ್ರಸಾದದಿಂದ ಅಖಂಡಿತ ಪ್ರಸನ್ನತೆಯು ಪ್ರಸಾದವಾಗುವುದು. ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಜಂಗಮ, ಪರಾತ್ಪರ, ಪರಮಾನಂದ, ಪರಮಾಮೃತ, ಪರಮಜ್ಞಾನ, ವಾಙ್ಮನೋತೀತ, ನಿತ್ಯಪರಿಪೂರ್ಣ ಎಂಬ ಮಾತು ಪ್ರಸಾದದ ಮಹತ್ವ ಮತ್ತು ಅದರಿಂದಾಗುವ ಪರಿಣಾಮವನ್ನು ಅರ್ಥವತ್ತಾಗಿ ಸೂಚಿಸುತ್ತಿದೆ. *ವಚನ ಚಿಂತನೆ*: ಶರಣರಲ್ಲಿ 'ಪ್ರಸಾದ' ಎಂಬುದಕ್ಕೆ ವ್ಯಾಪಕವಾದ ಅರ್ಥವಿದೆ.  “ನೈರ್ಮಲ್ಯಂ ಮನಸೋ ಲಿಂಗಂ ಪ್

ವಚನ ದಾಸೋಹ : ಆಚಾರವೆ ಭಕ್ತಂಗೆ ಅಲಂಕಾರವು

Image
ವಚನ ದಾಸೋಹ : ಆಚಾರವೆ ಭಕ್ತಂಗೆ ಅಲಂಕಾರವು ವಚನ : #ಆಚಾರವೆ ಭಕ್ತಂಗೆ ಅಲಂಕಾರವು.  ಆಚಾರವೆ ಭಕ್ತಂಗೆ ಸರ್ವಪೂಜ್ಯವು.  ಇಂತೀ ಆಚಾರವುಳ್ಳವನೆ ಭಕ್ತನು. ಆಚಾರವುಳ್ಳವನೆ ಯುಕ್ತನು. ಆಚಾರವುಳ್ಳವನೆ ಮುಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ - ಸ್ವತಂತ್ರ ಸಿದ್ಧಲಿಂಗೇಶ್ವರರು *ಅರ್ಥ*: ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರರು ಈ ವಚನದಲ್ಲಿ ಭಕ್ತನ ಲಕ್ಷ್ಮಣಗಳನ್ನು ವಿವರಿಸುತ್ತಾ ಭಕ್ತನಿಗೆ ಆಚಾರಗಳ ಅಳವಡಿಕೆಯ ಮಹತ್ವ ತಿಳಿಸಿದ್ದಾರೆ. ಆಚಾರವುಳ್ಳವನೆ ಭಕ್ತನು, ಯುಕ್ತನು, ಮುಕ್ತನು ಎನ್ನುತ್ತಾರೆ. ಇದು ಭಕ್ತಸ್ಥಲದ ವಚನ. *ಭಕ್ತಸ್ಥಲ*: ಷಟ್ಸ್ಥಲದಲ್ಲಿ ಮೊದಲನೆಯದು ಭಕ್ತಸ್ಥಲ,  ಷಟ್ಸ್ಥಲ ಸಾಧನೆಯ ಮೂಲವೇ ಭಕ್ತಿ.  ಷಟ್ಸ್ಥಲಗಳು ಬೆಳೆದಂತೆ ಭಕ್ತಿ ಇಲ್ಲಿ ಬೆಳೆಯುತ್ತದೆ. ಭಕ್ತಿಯು ಷಟ್ಸ್ಥಲದಲ್ಲಿ  ಚಲನಶೀಲ ಆಂತರಿಕ ವಿಕಾಸಶಕ್ತಿಯಾಗುತ್ತದೆ. ಭಕ್ತಸ್ಥಲದಲ್ಲಿ ಅದನ್ನು ' ಶ್ರದ್ಧಾ ಭಕ್ತಿ' ಎಂದು ಕರೆಯಲಾಗಿದೆ.  *ಶ್ರದ್ಧಾಭಕ್ತಿ* : ಇಲ್ಲಿ ಶ್ರದ್ದೆ ಎಂದರೆ ವಿಚಾರವಿಲ್ಲದೆ ಎಲ್ಲವನ್ನೂ ನಂಬುವ ಕುರುಡು ನಂಬಿಕೆಯಲ್ಲ. ನಾನು ಏನು ಆಗಬೇಕೆಂದು ಉದ್ದೇಶಿಸಿದ್ದೇನೆಯೋ ಮೂಲತಃ ಅದರ ಸ್ವರೂಪವೇ ನಾನು. ಆ ಸ್ವರೂಪವೇ ಇಷ್ಟಲಿಂಗ ರೂಪದಿಂದ ಕರಸ್ಥಲಕ್ಕೆ ಬಂದಿದೆ, ಅದರ ಅನುಸಂಧಾನದಿಂದ ಆಂತರಿಕ ಪರಿವರ್ತನೆಯಾಗಿ ಆ ಸಹಜ ಸ್ಥಿತಿಯನ್ನು ಪಡೆಯಬೇಕು ಎಂಬ ಸುಜ್ಞಾನವೆಂಬ ಅರಿವಿನ ಎಚ್ಚರವೇ ಇಲ್ಲಿ ಶ್ರದ್ಧೆ ಯಾಗುತ್ತದೆ. ಶ್ರದ್

ಕರ್ಮಯೋಗ : ಕರ್ಮಣ್ಯೇವಾಧಿಕಾರಸ್ತೇ_ಮಾ_ಫಲೇಷು

Image
ಕರ್ಮಯೋಗ :  ಕರ್ಮಣ್ಯೇವಾಧಿಕಾರಸ್ತೇ_ಮಾ_ಫಲೇಷು ಶ್ರೀಮದ್ಭಗವದ್ಗೀತೆಯ ಎರಡನೇ ಅಧ್ಯಾಯ ಸಾಂಖ್ಯಯೋಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವ ಶ್ಲೋಕಗಳು. ಶ್ಲೋಕ 47: #ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||೪೭|| -ಭಗವದ್ಗೀತಾ ಅರ್ಥ: ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷಿಯಾಗಿ ಫಲಕ್ಕೆ ಕಾರಣನೂ ತಾನೆಂದುಕೊಳ್ಳಬೇಡ ಮತ್ತು ಕರ್ಮ( ಕರ್ತವ್ಯ) ಮಾಡದೇ ಇರಬೇಕೆಂಬ ಹಂಬಲ ನಿನ್ನಲ್ಲಿ ಉಂಟಾಗದಿರಲಿ. ಶ್ಲೋಕ 48: #ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ | ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ ||೪೮|| -ಭಗವದ್ಗೀತಾ ಅರ್ಥ : ಗೆಲವು-ಸೋಲುಗಳಿಗೆ ಕುಂದದೆ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸುತ್ತ ನಿನ್ನ ಕರ್ತವ್ಯಗಳನ್ನು ಮಾಡು. ಈ ಸಮತ್ತ್ವಭಾವವೇ ಯೋಗ ಎಂದು ಕರೆಯಲ್ಪಡುತ್ತದೆ. ಎಂಬುದು ಈ  ಅರ್ಥ. ಜಯ-ಅಪಜಯ, ಕೀರ್ತಿ-ಅಪಕೀರ್ತಿ, ನೋವು-ನಲಿವು  ಇವೆಲ್ಲವನ್ನೂ ಅನುಭವಿಸುವ ಮನಸ್ಸು ಸ್ಥಿರವಾಗಿರಬೇಕು.  ಗೆಲುವು-ಸೋಲುಗಳಿಗೆ ಸಮನಾದ ಭಾವವನ್ನು ಹೊಂದುವ ಮನಸ್ಥಿತಿ ನಮ್ಮದಾಗಬೇಕು. *ಶ್ಲೋಕಗಳ ಚಿಂತನೆ*: ಇಲ್ಲಿ ಕರ್ಮದ ಅರ್ಥ *ಕಾರ್ಯ ಅಥವಾ ಕರ್ತವ್ಯಕ್ಕೆ*.  ಕರ್ತವ್ಯನಿರತನಿಗೆ ಜಯಾಪಜಯಗಳ  ಭಯ ಇರಬಾರದು. ಆಗುಹೋಗುಗಳ ಭಯ ಇರಬಾರದು.  ಪಾಪ ಪುಣ್ಯಗಳ ವಿಚಕ್ಷಣ ಇರಬಾರದು.

ಚೆನ್ನಬಸವಣ್ಣನವರ ಜಯಂತಿ

Image
🌷ಲಿಂಗಾಯತ ಧರ್ಮದ ಷಟ್ಸ್ತಲ ಚಕ್ರವರ್ತಿ ಶೂನ್ಯಪೀಠದ 2 ನೇ ಅಧ್ಯಕ್ಷ, ಚಿನ್ಮಯಜ್ಞಾನಿ, ವೈರಾಗ್ಯಮೂರ್ತಿ ಚೆನ್ನಬಸವೇಶ್ವರರ ಜನ್ಮ ಜಯಂತಿಯ ಶುಭಾಶಯಗಳು.🌷🌷🌷🌷 ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಲಿಂಗಾಯತ ಧರ್ಮದ ಸಪ್ತ ಪ್ರಮಥರಲ್ಲಿ ಒಬ್ಬರು.  ಚೆನ್ನಬಸವಣ್ಣನವರು ಗುರು ಬಸವಣ್ಣನವರ ಅಕ್ಕ ನಾಗಲಾಂಬಿಕೆ ಮತ್ತು ಶಿವದೇವರಿಗೆ ಪುತ್ರನಾಗಿ ಕ್ರಿ. ಶ. ೧೧೪೪ ರಲ್ಲಿ ಜನಿಸಿದರು.  ಚೆನ್ನಬಸವಣ್ಣನವರು ಅತಿ ಚಿಕ್ಕ ವಯಸ್ಸಿನಲ್ಲೇ ಅಸಾಧರಣ ಕಾರ್ಯಗಳನ್ನು ಮಾಡಿದ ಮಹಾಪುರುಷರಾಗಿದ್ದಾರೆ.  ಚನ್ನಬಸವಣ್ಣನವರ ಜನ್ಮಸ್ಥಳ ಕಲ್ಯಾಣವೆಂದು ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ ಮತ್ತು ಇತರ ಕೃತಿಗಳು ಹೇಳುತ್ತವೆ.  ಸಿಂಗಿರಾಜ ಪುರಾಣ 'ಅಮಲಬಸವ ಚಾರತ್ರ್ಯ' ದಲ್ಲಿ  ಅಕ್ಕನಾಗಮ್ಮನ ಪತಿ ಶಿವದೇವ ಚನ್ನಬಸವಣ್ಣನ ತಂದೆ ಎಂದು ಉಲ್ಲೇಖಿಸಿದೆ. ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯನಾಗಿ ಆಚಾರ್ಯ ಪುರುಷನಾಗಿ ಬೆಳಗಿದ ಚೆನ್ನಬಸವಣ್ಣನವರು ಭಕ್ತಿ, ಜ್ಞಾನ, ವೈರಾಗ್ಯಮೂರ್ತಿಯಾಗಿ ಕಂಗೊಳಿಸಿದ್ದಾರೆ. ಚೆನ್ನಬಸವಣ್ಣನವರು ಅವಿರಳಜ್ಞಾನಿ, ಸದಮಲಜ್ಞಾನಿ, ಷಟುಸ್ಥಲ ಸ್ಥಾಪನಾಚಾರ್ಯ, ದಿವ್ಯಗುಣ ಸಂಪನ್ನ ಎಂದು ಕಲ್ಯಾಣದ ಶರಣರಿಂದ ಬಿರುದು ಪಡೆದವರು. ಗುರು ಬಸವಣ್ಣನವರ ಸೋದರಳಿಯ ಚೆನ್ನಬಸವಣ್ಣ ಕೂಡಲ ಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಭಾಸಂಪನ್ನನಾದನು.  ಕಲ್ಯಾಣಕ್ಕೆ ಬಂದ ನಂತರ ಬಸವಣ್ಣನವರ ಮಹಾಮನೆಯ ಕಾರ್ಯದಲ್ಲಿ ನೆರವ